….ಎಂದಿರಬೇಕಾಗಿತ್ತು

ಆಕಾಶಮಾರ್ಗದಲ್ಲೂ ಇಳಿಜಾರು ಬೆಟ್ಟ
ಆಕ್ಸಿಡೆಂಟ್ ಝೋನ್, ಅಂಕುಡೊಂಕು ರಸ್ತೆ ಎಂದಿರಬೇಕಾಗಿತ್ತು
ಬ್ರೇಕು ಗೇರುಗಳ ಕಿರಿಕಿರಿ ಶಬ್ದ
ನಡುರಾತ್ರಿ ಟಾಯರ್ ಪಂಕ್ಚರ್ ಎಲ್ಲೋ ಕತ್ತಲಲ್ಲಿ
ಒಂಟಿಯಾಗಿ ನಿಂತ ಒಗ್ಗಾಲಿ ಬಸ್ಸು
ಹೊರಗೆ ಗಾಲಿ ಬದಲಿಸುವ
ಡ್ರೈವರ್, ಕ್ಲಿನರ್ಸ್ ಜೊತೆಗೊಂದಿಷ್ಟು ಜಗಳದ ಪ್ಯಾಸೆಂಜರ್ಸ್….
ಕೊನೆಯ ಸೀಟಿಗೆ ಅರ್ಜೆಂಟ್ದಲ್ಲಿ ಬಂದ
ಗಾಗಲ್ವಾಲಾನ ಬೂಟ ಸಪ್ಪಳ,
ಬೆಚ್ಚಗೆ ಮಲಗಿದ ಮಗು ತನ್ನಿರುವಿಕೆಯ ಅಳು
ಪಕ್ಕಲ್ಲೇ ಲೋಡೆಡ್ ಟ್ರಕ್ ಧಡಾರನೇ ದಾಟಿ ಹೋದದ್ದು
ಬಸ್ ಅಲುಗಾಟ
ಮತ್ತೆ ಡ್ರೈವರ್ ಸೀಟಿಗೆ ಹಾಜರ್
ಗೇರು ಬ್ರೇಕು ಚೆಕ್ ಮಾಡಬೇಕಾದ ಕೈ
ಟಿ.ವಿ. ಸ್ಟೀರಿಯೋ ಬಟನ್ಗಳ ಮೇಲೆ
ಸರಿಗಮ- ಉಲ್ಟಾ ಸನಿದಪ
ಹಾಡುವುದಕ್ಕೆ ರಾಗ ಕೂಡಿಸುವದೊ
ನೋಡುವುದಕ್ಕೆ ಕಣ್ಣು ಬಿಡುವುದೊ
ಗಡಿಯಾರ ನೋಡಿದ್ದೇ ನೋಡಿದ್ದು
ಊರು ತಲುಪುವುದೆಂದೊ! ಒಂದೇ ಸವನೆ ಚಡಪಡಿಕೆ…
ಅರೇರೆ! ಇದೇನಿದು ಕುಡಿದ ನೀರು ಅಲುಗಾಡದೆ
ಕೂದಲು ಕೊಂಕದೆ, ಸಾವಿರಾರು ಮೈಲು
ಆಕಾಶಹಾದಿ ದಾಟಿ ಬಿ.ಪಿ ಏರಿ ತಲೆಬಿಸಿಯಾಗದೆ
ಸಮಯಕ್ಕೆ ಸರಿಯಾಗಿ ಇಳಿದದ್ದು…..
ಛೇ! ಯಾಕೋ ಒಮ್ಮೊಮ್ಮೆ ಬೇಸರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೃಷ್ಟಿ ಪಲ್ಲವಿ
Next post ಗೆರೆ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys